ಅದು ಒಂದು ಹಳ್ಳಿಯ ರೈತನ ಮನೆ. ಆ ಮನೆಗೆ ಏಕಾಏಕಿ ನುಗಿದ್ದ ಅರಣ್ಯಾಧಿಕಾರಿಯೊಬ್ಬರು ಹಿಂದೆ ಮುಂದೆ ಯೋಚಿಸದೇ ಆ ರೈತನನ್ನು ವಾಚಾಮಗೋಚರವಾಗಿ ಬೈಯತೊಡಗಿದರು.
ಏನ್ರಿ, ನಿಮ್ಮ ದನಗಳೆಲ್ಲ ನಮ್ಮ ಪ್ಲಾಂಟೇಶನ್ ಒಳಗೆ ನುಗ್ಗಿ ನೆಟ್ಟಿರುವ ಗಿಡಗಳನ್ನೆಲ್ಲ ಹಾಳು ಮಾಡಿವೆ. ಬೇಲಿಯನ್ನೂ ಮುರಿದು ಹಾಕಿವೆ.ದನಕರಗಳನ್ನು ಕಾಡಿಗೆ ಬಿಡದೆಕೊಟ್ಟಿಗೆಯಲ್ಲೇ ಕಟ್ಟಿಹಾಕಿಕೊಳ್ಳಿ ಎಂದು ಎಷ್ಟು ಬಾರಿ ಹೇಳಬೇಕು ನಿಮಗೆ? ನಾಳೆಯಿಂದ ನಿಮ್ಮ ದನಗಳನ್ನು ಕೊಟ್ಟಿಗೆಯಲ್ಲೇ ಕಟ್ಟಿಹಾಕಿ ಇಡಬೇಕು ಎಂದು
ಅಬ್ಬರಿಸಿದ. ಜತೆಗೆ, ಇನ್ನು ಒಂದೇ ಒಂದು ಬಾರಿ ನಿಮ್ಮ ದನಕರುಗಳು ಕಾಡಿಗೆ ನುಗ್ಗಿದರೆ ದಂಡ ಹಾಕುತ್ತೇನೆ ಎಂದು ಬೆದರಿಕೆಯನ್ನು ಹಾಕಿದ.
ಆದರೆ, ಆ ರೈತ ಈ ಬೆದರಿಕೆಗೆ ಕಿಂಚಿತ್ತೂ ಅಳುಕಲಿಲ್ಲ, ಅಂಜಲಿಲ್ಲ. ಬದಲಾಗಿ, ಸಾಹೇಬರೇ ನಿಮ್ಮ ಸರಕು ಮುಗೀತಾ ಎಂದು ಪ್ರಶ್ನಿಸಿ, ಈಗ ನನ್ನ ಮಾತು ಕೇಳಿ ಎಂದವನೇ ಶುರುವಿಟ್ಟುಕೊಂಡ. ಅರಣ್ಯಾಧಿಕಾರಿಗಳೇ, ನಾವು ನಿಮಗೆ ಎಷ್ಟು ಬಾರಿ ಹೇಳ ಬೇಕು? ನಿಮ್ಮ ಮಂಗಗಳು ಪ್ರತಿದಿನ ನಮ್ಮ ತೋಟಕ್ಕೆ ಬಂದು ಬೆಳೆಗಳನ್ನೆಲ್ಲ ಹಾಳು ಮಾಡುತ್ತಿವೆ. ಅರ್ಜಿ ಕೊಟ್ಟು ಕೊಟ್ಟು ಸಾಕಾಯ್ತು. ಆದರೆ, ನೀವು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ನಾನೇ ನಿಮ್ಮ ಬಳಿ ಬರಬೇಕು ಎಂದಿದ್ದೆ. ನೀವು ಬಂದಿದ್ದು ಚಲೋ ಆಯ್ತು...
ಈಗ ಒಂದು ಕೆಲಸ ಮಾಡಿ. ನಾಳೆಯಿಂದ ನಿಮ್ಮ ಕಾಡಿನಲ್ಲಿರುವ ಎಲ್ಲ ಆನೆ, ಕಾಡುಕೋಣ, ನವಿಲು, ಹಂದಿ, ಮಂಗಗಳನ್ನೂ ಕಟ್ಟಿಹಾಕಿ. ನೀವುಮಂಗಗಳನ್ನೆಲ್ಲ ಕಟ್ಟಿಹಾಕಿಕೊಂಡ ಮೇಲೆ ಮಂಗಗಳು ತೋಟಕ್ಕೆ ಬರುವುದಿಲ್ಲ ಎಂದು ನಮಗೆ ಖಾತರಿಯಾಗಲಿ.ಅದಾಗುತ್ತಿದ್ದಂತೆಯೇ ನಾವುನಮ್ಮದನಕರುಗಳನ್ನು ಕಟ್ಟಿಹಾಕುತ್ತೇವೆ. ನಿಮ್ಮ ಕಾಡಿಗೆ ಬರದಂತೆ ಮಾಡುತ್ತೇವೆ.
ಇಷ್ಟು ಹೇಳಿದ ಮೇಲೂ ನಿಮ್ಮ ಮಂಗಗಳು ನಮ್ಮ ತೋಟಕ್ಕೆ ನುಗ್ಗಿದರೆ ಆಗ ನಾವೇ ಅರಣ್ಯ ಇಲಾಖೆಗೆ ದಂಡ ಹಾಕುತ್ತೇವೆ. ಎನ್ನುತ್ತಿದ್ದಂತೆಯೇ ಆ ಅಧಿಕಾರ ಮಂಗ-ಮಾಯ!